ಕಬ್ಬು ನುರಿಸುವ ಹಂಗಾಮು ಕಳೆದ ಒಂದು ತಿಂಗಳಿನಿಂದ ಪ್ರಾರಂಭ ಮಾಡಿದ್ದು ಗಡಿ ಭಾಗದ ಕಬ್ಬು ಕಟಾವು ಚುರುಕುಗೊಂಡಿದ್ದು, ಈ ಹಂಗಾವಮಿನಲ್ಲಿ ಸಿಓ 265 ತಳಿಯ ಕಬ್ಬು ಕಟಾವು ಮಾಡಲು ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿದ್ದರಿಂದ ಕಬ್ಬು ಉತ್ಪಾದಕರಲ್ಲಿ ಆತಂಕ ಮೂಡಿಸಿದೆ.
265 ತಳಿಯ ಕಬ್ಬು ಸರಿಯಾದ ವೇಳೆಯಲ್ಲಿ ಕಟಾವು ಆಗದೇ ಹೋದಲ್ಲಿ ಕಬ್ಬಿಗೆ ತುರಾಯಿ ಬಂದು ಬೆಂಡು ಒಡೆದು ತೂಕದಲ್ಲಿ ಇಳಿಮುಖವಾಗುತ್ತದೆ. ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡದೇ ಉದ್ದಲ್ಲಿ ರೈತರು ಹಾನಿ ಅನುಭವಿಸಬೇಕಾಗುತ್ತದೆ ಎಂಬುದನ್ನು 260 ತಳಿಯ ಕಬ್ಬು ಉತ್ಪಾದಕರು ತಿಳಿಸಿದ್ದಾರೆ.
ಈ ಬಾರಿ ಮಳೆಯ ಅಭಾವದಿಂದ ಉತ್ಪಾದನೆ ಕುಂಠಿತಗೊಂಡಿದೆ. ಆದರೂ ವಿಳಂಬ ಮಾಡುತ್ತಿರುವದು ಯಾವ ನ್ಯಾಯ ಎಂದು ರೈತರ ಪ್ರಶ್ನೆಯಾಗಿದೆ. ರೈತರ ಬಾಳು ಹಸನಾಗಬೇಕಾದಲ್ಲಿ ಕಾರಕಾಣೆಗಳು 265 ತಳಿ ಕಬ್ಬನ್ನು ಶೀಘ್ರ ಕಟಾವು ಮಾಡಲು ಮುಂದಾಗಬೇಕಾಗಿದೆ.
