ಬೇಡಕಿಹಾಳ ಗ್ರಾಮದಲ್ಲಿ ಕರ್ತವ್ಯ ಫೌಂಡೇಶನ್ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಶಿಬಿರವನ್ನು ಏರ್ಪಡಿಸಿದ್ದರು.
ಬೇಡಕಿಹಾಳ, ಶಮನೇ ವಾಡಿ, ಬೋರಗಾಂವ, ಚಾಂದ ಶಿರದವಾಡ, ಕಾರದಗಾ, ಭೋಜ, ಗಳತಗಾ, ಅಕ್ಕೌಳ ಮತ್ತು ನೇಜ ಗ್ರಾಮದ 210 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿ.ಪಂ. ಸದಸ್ಯೆ ಸುಜಾತಾ ಖೋತ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಗ್ರಾ.ಪಂ. ಅಧ್ಯಕ್ಷ ಶಂಕರ ದಾದಾ ಪಾಟೀಲ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರೊ. ಸುಧಾಕರಇಂಡಿ, ಎಸ್.ಟಿ. ಲಗಾರೆ, ಡಿ.ಎಂ. ತಹಶೀಲ್ದಾರ, ಜ್ಯೌತಿಬಾ ಪಾಟೀಲ, ಸುಧಾಕರ ಸೋನಾಳಕರ, ಶಿವಾಜಿ ಮ್ಹಾರೆ, ಪ್ರಕಾಶ ಮಾಳಿ ಮುಂತಾದವರು ಪರೀಕ್ಷಾ ಪೂರ್ವ ತಯಾರಿ ಕುರಿತು ಮಾರ್ಗದರ್ಶನ ಮಾಡಿದರು.
ಸಚೀನ ಪಾಟೀಲ, ಅರ್ಚನಾ ದೇಸಾಯಿ, ತಾತ್ಯಾಸಾಬ ಖೋತ, ಎ.ವಿ. ಮಾಲಗಾಂವೆ, ಸಂಜಯ ದೇಸಾಯಿ, ಸಿದ್ದೇಶ್ವರ ಮಾನೆ, ಸಾಗರ ಕೇಸರಕರ, ವಿಶಾಲ ಬಾಬರ, ಕಿರಣ ಪಾಂಗೇರಿ ಮೋಹನ ಸುಖಸಾರೆ, ಎಸ್.ಕೆ. ಸಂಕಪಾಳೆ, ಅನಿಲ ಬಾಕಳೆ, ಪ್ರಶಾಂತ ದೇಸಾಯಿ, ರವೀಂದ್ರ ಜನವಾಡ, ಸಚಿನ ಶೀಳಕೆ, ಹನುಮಂತ ಜಾಧವ ಮುಂತಾದವರಿದ್ದರು. ಅನಂತ ಮೋರೆ ಸ್ವಾಗತಿಸಿದರು